?ಭೀಮಾ ತೀರದಲ್ಲಿ......... ಈ ವಾರ ಬಿಡುಗಡೆ
Posted date: 04 Wed, Apr 2012 ? 02:19:18 PM

ಕೆಲವು ಸಿನಿಮಾಗಳಷ್ಟೆ ಅನುಭವದ ಜೊತೆಗೆ ಮನರಂಜನೆಯನ್ನು ಹೆಕ್ಕಿಕೊಡುತ್ತಾ ಹೋಗುತ್ತದೆ. ಅದರ ಸಾಲಿಗೆ ಈ ವಾರ ಬಿಡುಗಡೆಯಾಗುತ್ತಿರುವ ’ಭೀಮಾ ತೀರದಲ್ಲಿ......... ಸೇರಿಕೊಳ್ಳುತ್ತದೆ. ನಿಜ ಜೀವನದಲ್ಲಿ ಘಟಿಸಿದ ಭೀಮಾ ತೀರದ ಹಂತಕರು ಪುಸ್ತಕದ ರೂಪವಾಗಿ ಕಂಡಿದ್ದು ಇದೆ. ಆದರೆ ನಿರ್ದೇಶಕ ಓಂ ಪ್ರಕಾಶ್ ರಾವ್ ಕೇವಲ ಚಂಡ್ಯಾ ಪಾತ್ರವನ್ನೇ ಕುರಿತು ತಮ್ಮದೇ ಆದ ಶೈಲಿಯಲ್ಲಿ ಹೊಸ ಅನುಭವವನ್ನು ನೀಡುತ್ತಿದ್ದಾರೆ. ಅದಕ್ಕೆ ಕಾರಣ ಚಂಡ್ಯಾನ ಪಾತ್ರ ಬೀಡು ಬಿಟ್ಟ ಸ್ಥಳಗಳಲ್ಲಿ ಕೆಲವು ಪೋಲಿಸ್ ಅಧಿಕಾರಿಗಳಾದ ರಾಜಪ್ಪ, ಮುತ್ತುರಾಜ್ ಸಹಾಯದೊಂದಿಗೆ ನಿರ್ಮಾಪಕ ಅಣಜಿ ನಾಗರಾಜ್ ಅತಿ ಹೆಚ್ಚು ಬಜೆಟ್ಟಿನ ಸಿನಿಮಾ ತಯಾರಾಗಿದೆ. ’ಭೀಮಾ ತೀರದಲ್ಲಿ........... ಸಮರ್ಥ ವೆಂಚರ‍್ಸ್ ವತಿಯಿಂದ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

’ಭೀಮಾ ತೀರದಲ್ಲಿ’ ಚಿತ್ರಕ್ಕಾಗಿ ೯೦ ದಿವಸಗಳ ಚಿತ್ರೀಕರಣವನ್ನು ೪ ಕ್ಯಾಮಾರಗಳ ಸಹಾಯದೊಂದಿಗೆ ಇಳಕಲ್, ಬಿಜಾಪುರ, ಬಾಗಲಕೋಟೆ, ಜಮಕಂಡಿ, ಸವದತ್ತಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣವಾಗಿದೆ.  ಕೇವಲ ಒಂದು ಚೇಸ್‌ಗಾಗಿ ೬೦ ರಿಂದ ೭೦ ಲಕ್ಷ ರುಪಾಯಿ ವೆಚ್ಚವಾಗಿರುವುದು ಹೆಚ್ಚುಗಾರಿಕೆ. ಚಿತ್ರೀಕರಣವಾದಂತಹ ಸ್ಥಳಗಳಲ್ಲಿ ಆಯಾ ಪ್ರಾಂತ್ಯದ ಕನ್ನಡದ ಸೊಗಡನ್ನೇ ಬಳಸಲಾಗಿದೆ.

ಇದು ಹೆಸರಾಂತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ೨೬ನೇ ಸಿನಿಮಾ. ಸಾಹಸ, ನೈಜ ಘಟನೆಗಳ ಸಹಜ ನಿರೂಪಣೆ ಜೊತೆಗೆ ಸುಂದರವಾದ ಸ್ಥಳಗಳಲ್ಲಿ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಎಂ.ರುದ್ರೇಶ್ ಅರ್ಪಿಸುವ ವೀರ ಫಿಲಂಸ್ ಅವರ ’ಭೀಮಾ ತೀರದಲ್ಲಿ..................’ಚಂದಪ್ಪ ಎಂಬ ವ್ಯಾಘ್ರ ........... ಚಿತ್ರಕ್ಕೆ ಚಂದ್ಯಾನ ಪಾತ್ರದಲ್ಲಿ ಈ ಹಿಂದೆ ತೆರೆಯ ಮೇಲೆ ’ಚಂಡ’ ಆಗಿದ್ದ ವಿಜಯ್ ಪ್ರಚಂಡ ಆಗಲು ಅನೇಕ ತಯಾರಿಯನ್ನು ಕೂಡ ಮಾಡಿಕೊಂಡಿದ್ದು ಅಭಿನಯಿಸಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಪ್ರಣೀತ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ಬೋಪಯ್ಯ, ದೊಡ್ಡಣ್ಣ, ಉಮಾಶ್ರೀ, ಶೋಭರಾಜ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಅಣಜಿ ನಾಗರಾಜ್ ಅವರೇ ಈ ಚಿತ್ರದ ಛಾಯಾಗ್ರಾಹಕ. ಎಸ್. ಮನೋಹರ್ ಸಂಕಲನ, ಎಂ.ಎಸ್.ರಮೇಶ್ ಸಂಭಾಷಣೆ, ಪಳನಿ ರಾಜ್ ಸಾಹಸ, ಅಭಿಮನ್ ರಾಯ್ ಸಂಗೀತ ಈ ಚಿತ್ರಕ್ಕೆ ಒದಗಿಸಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed